ಪ್ರಪಂಚವೇ ನಿಬ್ಬೆ’ರಗಾಗುವ ಬೌದ್ಧಾವತಾರದ ಅಸಲಿ ಕಥೆ ಇದು. ನಿಜಕ್ಕೂ ಬೌದ್ಧನೆಂದರೆ ಯಾರು ಗೊತ್ತಾ.
ಮಹಾವಿಷ್ಣುವಿನ ಹತ್ತು ಅವತಾರಗಳು ಯಾವುವೆಂದು ನಿಮಗೆಲ್ಲ ತಿಳಿದಿದೆ. ಅವುಗಳಲ್ಲಿ ಒಂಭತ್ತನೇ ಅವತಾರವಾದ ಬೌದ್ಧಾವತಾರದ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಬೌದ್ಧಾವತಾರವೆಂದರೆ ಗೌತಮ ಬುದ್ಧ ಎಂದು ಬಹುತೇಕರು ತಿಳಿದಿದ್ದಾರೆ. ಆದರೆ ಅದು ನಿಜವಲ್ಲ. ಬೌದ್ಧ ಎಂದರೆ ವಿ’ವಸ್ತ್ರ ಅಥವಾ ವಸ್ತ್ರಹೀ’ನ. ಈ ಅವತಾರದಲ್ಲಿ ಭಗವಂತನು ವಿ’ವಸ್ತ್ರವಾಗಿ ಅವತರಿಸಿದ್ದಾನೆ. ಬಲಿಷ್ಠ ಅಸು’ರನೋ’ರ್ವ ಬ್ರಹ್ಮನಿಂದ ವರ ಪಡೆದು ಮೂರು ಲೋಕಗಳ ಮೇಲೆ ಆ’ಕ್ರಮಣ ಮಾಡಲಾರಂಭಿಸುತ್ತಾನೆ. ಆಗ ದೇವತೆಗಳು ಮತ್ತು ದಾನವರ ನಡುವೆ ಯು’ದ್ಧ ನಡೆಯುತ್ತದೆ.
ಇನ್ನೇನು ಆತನ ಪುಣ್ಯಾಂಶ ಮುಗಿದು ಆತನು ಸೋಲಬೇಕು ಎನ್ನುವಷ್ಟರಲ್ಲಿ ಆತನ ಸತಿಯ ಪತಿವೃತಾ ಪರಿಪಾಲನೆ ಮತ್ತು ಅಪಾರ ದೈವ ಭಕ್ತಿಯಿಂದ ಅವನ ಪುಣ್ಯಾಂಶ ಹೆಚ್ಚಾಗುತ್ತಿರುತ್ತದೆ. ಹೀಗಿರುವಾಗ ದೇವಾನುದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ. ಆಗ ವಿಷ್ಣು ಅತಿ ಸುಂದರವಾದ ತರುಣನ ವೇಷದಲ್ಲಿ ವಿ’ವಸ್ತ್ರದಿಂದ ಆಕೆಯ ಮುಂದೆ ಬಂದು ನಿಲ್ಲುತ್ತಾನೆ. ಆತನ ಅತಿ ಸುಂದರವಾದ ರೂಪವನ್ನು ನೋಡಿ ಒಂದು ಕ್ಷಣ ಆಕೆಯ ಮನಸ್ಸು ಚಂ’ಚಲಗೊಳ್ಳುತ್ತದೆ. ಸರಿಯಾಗಿ ಅದೇ ಸಮಯಕ್ಕೆ ಪರಶಿವನು ಅಸುರನನ್ನು ಸಂ’ಹರಿಸುತ್ತಾನೆ.
ಅದೇ ಬೌದ್ಧಾವತಾರ. ಹಾಗಾದರೆ ಆ ಅವತಾರದ ಆರಾಧನೆ ಇಲ್ಲವೇಕೇ. ಅದಕ್ಕೆ ಇಲ್ಲಿದೆ ಉತ್ತರ. ಆ ಅವತಾರ ಬೇರಾವುದು ಅಲ್ಲ ಅದುವೇ ಪಾಂಡುರಂಗ ಅಥವಾ ವಿಠ್ಠಲನ ಅವತಾರ. ಹೌದು ಪಾಂಡುರಂಗನ ಮೂಲ ವಿಗ್ರಹ ಬೌದ್ಧಾವತಾರದಲ್ಲೇ ಇದೆ. ಇದು ಮಹಾರಾಷ್ಟ್ರದ ಕುರ್ಡುವಾಡಿ ಹತ್ತಿರವಿರುವ ಮಾಢಾ ಎಂಬ ಪುಟ್ಟ ಗ್ರಾಮದಲ್ಲಿದೆ. ಇದು ಬೌದ್ಧವತಾರದಲ್ಲೇ ಇದೆ. ಮು’ಸ್ಲೀಮರ ಆ’ಕ್ರಮ’ಣದಿಂದ ರಕ್ಷಿಸಲು ಯಾರಿಗೂ ತಿಳಿಯದೇ ರಾತ್ರಿ ವೇಳೆಯಲ್ಲಿ ಜೋಳದ ಚೀಲದಲ್ಲಿ ಆ ಮೂಲ ವಿಗ್ರಹವನ್ನು ಪಂಡರಾಪುರದಿಂದ ಮಾಢಾಗೆ ಸ್ಥಳಾಂತರಿಸಲಾಯಿತು.
ಇದೇ ಕಾರಣಕ್ಕೆ ಇಂದಿಗೂ ಅಲ್ಲಿ ಗರ್ಭಗುಡಿಯ ಚೌಕಟ್ಟಿಗೆ ಜೋಳದ ತೆನೆಗಳನ್ನು ಕಟ್ಟುತ್ತಾರೆ. ರಾಜಾರಾಮ ಮಹಾರಾಜರ ಅಭಂಗದಲ್ಲಿ ಹೇಳಿದ್ದಾರೆ, ಪಂಢರಿರಾಯಾ ಸ್ವಾಮಿ ಪಾಂಡುರಂಗ, ಉದ್ಧರಿಲೆ ಜಗಾ ಭೇಟಿಹೋತಾ. ಬೌದ್ಧ ಅವತಾರ ವಿಠೇವರಿ ಉಭಾ, ವೈಕುಂಠಿಚಾ ಶೋಭಾ ಪಾಂಡುರಂಗ. ಹೀಗಿದ್ದರೂ ಬೌದ್ಧಾವತಾರ ಗೌತಮ ಬುದ್ಧನೊಂದಿಗೆ ಹೇಗೆ ಮತ್ತು ಏಕೆ ಸೇರಿಕೊಂಡಿತು. ಉತ್ತರ : ಸಾಮ್ರಾಟ್ ಅಶೋಕ ಬುದ್ಧನ ಅನುಯಾಯಿಯಾಗಿ ಬೌದ್ಧ ಧರ್ಮ ಸ್ವೀಕರಿಸಿದ.
ಆದರೆ ತಾನು ಮಾತ್ರ ಸ್ವೀಕರಿಸದೆ ಎಲ್ಲರನ್ನೂ ಬಲವಂತವಾಗಿ ಬೌದ್ಧ ಧರ್ಮಕ್ಕೆ ಮತಾಂತರ ಮಾಡಲು ಪ್ರಾರಂಭಿಸಿದ. ಆಗ ಬುದ್ಧಿವಂತರು ಮತ್ತು ಜ್ಞಾನಿಗಳು ಅಶೋಕನಿಗೆ ಶಾಸ್ತ್ರದಲ್ಲಿ ವೇದಗಳಲ್ಲಿ ಬರುವ ಬೌದ್ಧ ಎಂಬ ಶಬ್ದ ತೋರಿಸಿ ಆತನ ಅವತಾರದ ಬಗ್ಗೆ ವೇದ ಶಾಸ್ತ್ರಗಳಲ್ಲಿ ಉಲ್ಲೇಖವಿದೆ, ನಾವೂ ಕೂಡ ಆತನನ್ನೇ ಆರಾಧಿಸುತ್ತೇವೆ ಎಂದು ದಶಾವತಾರದ ಚಿತ್ರಗಳಲ್ಲಿ ಒಂಭತ್ತನೇ ಅವತಾರ ಬುದ್ಧನದೆಂದು ನಂಬಿಸಿ ಮತಾಂತರದಿಂದ ಧರ್ಮವನ್ನು ಉಳಿಸಿದರು. ಇಂದಿಗೂ ನಾವು ಇದನ್ನೇ ನಂಬಿಕೊಂಡು ಬಂದಿದ್ದೇವೆ.
ಇನ್ನಾದರೂ ಸತ್ಯ ತಿಳಿಯಿರಿ ಹಾಗೂ ನಿಮ್ಮ ಮಕ್ಕಳಿಗೂ ತಿಳಿಸಿ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.